ಕರ್ನಾಟಕ ರಾಜ್ಯಕ್ಕೆ ವಲಸೆ ಬಂದು ನೆಲೆಸಿದವರಲ್ಲಿ ಶವಣ ಭಟ್ಟಾಚಾರ ಕೂಡ ಒಬ್ಬರು. ಆದರೆ ಅವರ ತೆರೆದ ಹೃದಯ ಮತ್ತು ಮುಕ್ತ ಮನಸ್ಸು ಅವರನ್ನು ಇತರ ವಲಸಿಗರಿಂದ ಭಿನ್ನವಾಗಿಸುತ್ತವೆ. ಅವರು ಈ ದೇಶದ ವೈವಿಧ್ಯತೆಯನ್ನು ಗೌರವಿಸುವ ಮನಸ್ಸುಳ್ಳ ನಿಜ ಭಾರತೀಯ.
ಸಾಕಷ್ಟು ಜನ (ಭಾರತೀಯರಷ್ಟೇ ಅಲ್ಲ, ಬದಲಿಗೆ ಕೆಲ ವಿದೇಶಿಯರೂ ಸಹ) ಕರ್ನಾಟಕಕ್ಕೆ ವಲಸೆ ಬಂದಾಗ ಅಥವಾ ಕರ್ನಾಟಕಕ್ಕೆ ವಲಸೆ ಬರಲು ಯೋಜಿಸುತ್ತಿರುವಾಗ ಕನ್ನಡವನ್ನು ಕಲಿಯಬೇಕಾಗಿ ಬಂದಾಗ ಗೋಗರೆಯುತ್ತಾರೆ. ಅವರ ಸಾಮಾನ್ಯ ವಾದವೆಂದರೆ 'ನನಗೆ ಹಿಂದಿ ಅಥವಾ ಆಂಗ್ಲ ಬರುವಾಗ ಕನ್ನಡವನ್ನೇಕೆ ಕಲಿಯಬೇಕು' ಎಂಬುದು. ಆದರೆ ಇದೇ ಜನ ಯಾವುದೋ ಅರಿಯದ ಪರದೇಶಿ ಭಾಷೆಯನ್ನು (ಆಂಗ್ಲವನ್ನೂ ಸೇರಿಸಿ) ಕಲಿಯಲು ತಿಂಗಳು/ವರ್ಷಗಟ್ಟಲೆ ಸಮಯವನ್ನು ಕಳೆಯಲು ಯೋಚಿಸುವುದಿಲ್ಲ.
ಇದು ಕೇವಲ ಹಿಂದಿ ಮಾತನಾಡುವ ಭಾರತದ ಉತ್ತರದ ರಾಜ್ಯಗಳಿಂದ ಬರುವ ಜನರ ಬಗ್ಗೆಯಲ್ಲ, ಬದಲಿಗೆ ಕರ್ನಾಟಕಕ್ಕೆ ವಲಸೆ ಬರುವ ಪ್ರತಿಯೊಬ್ಬರ ಬಗ್ಗೆ. ಯಾರು ಕನ್ನಡ ಕಲಿಯದೇ ಗರ್ವ/ಉದ್ಧಟತನ ತೋರುತ್ತಾ ಅವರಿಲ್ಲಿ ಬಂದಾಗ ಕನ್ನಡಿಗರೇ ಅವರೊಂದಿಗೆ ಅವರ ಭಾಷೆಯಲ್ಲಿ ಅಥವಾ ಹಿಂದಿ/ಆಂಗ್ಲದಲ್ಲಿ ಮಾತನಾಡಬೇಕೆಂದು ಬಯಸುತ್ತಾರೋ ಅವರ ಬಗ್ಗೆ.
ಇದು "ತಾವು ಕರ್ನಾಟಕದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿಗೆ ನೆಲೆಸಿದ್ದರೂ ಸಹ ಕನ್ನಡ ಕಲಿಯದಿದ್ದರೆ ಪರವಾಗಿಲ್ಲ ಆದರೆ ಕನ್ನಡಿಗರು ಮಾತ್ರ ವಲಸೆ ಬಂದಿರುವ ಜನರೊಂದಿಗೆ ಕನ್ನಡದ ಬದಲಿಗೆ ಹಿಂದಿ/ಆಂಗ್ಲ/ಇತರೆ ಭಾಷೆಗಳಲ್ಲಿ ವ್ಯವಹರಿಸಬೇಕೆಂದು" ಬಯಸುವ ಕುಬ್ಜ ಮನಸ್ಕ ಜನರ ಬಗ್ಗೆ.
ಈ ಲೇಖನದಲ್ಲಿ ಹೇಗೆ ಒಬ್ಬ ಮುಕ್ತ ಮನಸ್ಸಿನ ವ್ಯಕ್ತಿ ಸ್ಥಳೀಯ ಜನ-ಜೀವನವನ್ನು ಪ್ರಶ್ನಿಸದೇ ಕನ್ನಡಿಗ ಸಮುದಾಯದಲ್ಲಿ ಬೆರೆತು ಒಂದಾಗಬಹುದು ಎಂಬುದನ್ನು ನೀವು ತಿಳಿಯಬಹುದು.
ಶವಣ ಭಟ್ಟಾಚಾರ ಅವರ ಬಂಗಾಳಿ ಕುಟುಂಬ ಸುಮಾರು ೪೬ ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ವಲಸೆಬಂದಿರುತ್ತದೆ ಮತ್ತು ಇವರು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುತ್ತಾರೆ.
"ಹೊರಗಿನವರ ಮೇಲೆ ಕರ್ನಾಟಕ ಏಕೆ ಕನ್ನಡವನ್ನು ಹೇರುತ್ತಿದೆ?" ಎಂದು ಜನ ಅವರನ್ನು ಕೇಳಿದಾಗ ಅವರಿಂದ ಬಂದ ಉತ್ತರ ಅದ್ಭುತವಾದದ್ದು. ಇಂತಹ ಉತ್ತರ ಕೇವಲ ಮುಕ್ತ ಮನದ ಮತ್ತು ತೆರೆದ ಹೃದಯದ ವ್ಯಕ್ತಿಗಳು ಮಾತ್ರ ನೀಡಬಲ್ಲರು. ಶವಣ ಭಟ್ಟಾಚಾರರ ಉತ್ತರವನ್ನು ಅವರ ಮಾತುಗಳಲ್ಲಿಯೇ ಮುಂದೆ ಓದಿ...