ಕರ್ನಾಟಕದ ಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಜನಜೀವನ ಅಸ್ಥವ್ಯಸ್ಥವಾದಾಗ ಹಳತು ಹೊನ್ನುವಿನ ಎಲ್ಲ ಸ್ನೇಹಿತರಿಗೆ ಪೇಟಿಎಂಅಲ್ಲಿ ಪರಿಚಯಿಸಿದ್ದ "ದೇಣಿಗೆ" ವಿಭಾಗದ ಬಗ್ಗೆ ಅರಿವುಮೂಡಿಸಲು ಮತ್ತು ಆ ಮೂಲಕ ನಂಬಿಗಸ್ತ ಮೂಲಗಳಿಂದ ನೆರೆ ಸಂತ್ರಸ್ತರಿಗೆ ಸಹಾಯಮಾಡುವುದು ಎಷ್ಟು ಸರಳವಾಗಿದೆ ಎನ್ನುವುದರ ಬಗ್ಗೆ ಸಂದೇಶಗಳನ್ನು ಕಳುಹಿಸಿದ್ದೆವು.
ಸಾಕಷ್ಟು ಜನ ಆಗ ನಾವು ಕಳಿಸಿದ್ದ ಸಂದೇಶಗಳಲ್ಲಿ ಪೇಟಿಎಂ ಕನ್ನಡದಲ್ಲಿರುವುದನ್ನು ಗಮನಿಸಿ, "ಪೇಟಿಎಂಅನ್ನು ಕನ್ನಡದಲ್ಲಿ ಬಳಸುವುದು ಹೇಗೆ" ಎಂಬ ಪ್ರಶ್ನೆಗಳನ್ನು ಕಳಿಸಲಾರಂಭಿಸಿದರು. ಅದರ ಪರಿಣಾಮವಾಗಿಯೇ ಇಂದಿನ ಈ ಲೇಖನ :)