ಕ್ರೈಸ್ತರ ಕ್ರೂರತನ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು

ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಕ್ರೈಸ್ತ ಮಿಷನರಿಗಳು ಮಹಿಳೆ, ಮಕ್ಕಳು, ಪುರುಷರ ಸಮೇತ ಸಾರ್ವಜನಿಕವಾಗಿ ಸಹಸ್ರಾರು/ಲಕ್ಷಾಂತರ ಅಮಾಯಕ ಜೀವಗಳನ್ನು ಕ್ರೂರವಾಗಿ ಹಿಂಸಿಸಿದ "ಗೋವಾ ಶೋಧನೆಯೆಂಬ [ಉಲ್ಲೇಖ]" ಕ್ರೈಸ್ತರು ನಡೆಸಿದ ಸಿಖ್/ಜೈನ/ಬೌದ್ಧ/ಹಿಂದೂಗಳ ಇತ್ತೀಚಿನ ಹತ್ಯಾಕಾಂಡದೊಂದಿಗೆ ನನ್ನ ಈ ಲೇಖನವನ್ನು ಆರಂಭಿಸುತ್ತೇನೆ.



ವಿದೇಶಿ ಆಕ್ರಮಣಕಾರರು ಎಂದಾಕ್ಷಣ ನಾವು ನೆನಪಿಸಿಕೊಳ್ಳುವುದು ಕೇವಲ "ಮುಸ್ಲಿಂ ಆಕ್ರಮಣಕಾರರು ಹಾಳುಗೆಡವಿದ ಹಂಪಿ ಮತ್ತಿತರೆ ಹಿಂದೂ ದೇವಸ್ಥಾನಗಳು [ಉಲ್ಲೇಖ]", "ಮುಸ್ಲಿಂ ಆಡಳಿತಗಾರರಿಂದ ನಡೆಸಲ್ಪಟ್ಟ ಹಿಂದೂ/ಸಿಖ್/ಬೌದ್ಧ/ಜೈನ ಮಹಿಳೆಯರ ಸಾಮೂಹಿಕ ಅತ್ಯಾಚಾರ [ಉಲ್ಲೇಖ]", "ಮುಸ್ಲಿಮರ ಮತ್ತಿತರೆ ಕ್ರೂರತನದ ಕರಾಳ ಅಧ್ಯಾಯಗಳು [ಉಲ್ಲೇಖ]" ಇವುಗಳನ್ನು ಹೊರತುಪಡಿಸಿದರೆ ನಮಗೆ ನೆನಪಾಗುವುದು "ಬ್ರಿಟೀಷರ ಕ್ರೂರತನ (ಕೆಲವು ಮಹಾನುಭಾವರು ಬ್ರಿಟೀಷರಿಂದ ನಮ್ಮ ದೇಶಕ್ಕೆ ಏನೋ ಒಳ್ಳೆಯದಾಗಿದೆ ಎಂಬ ಮೂಢನಂಬಿಕೆಯಲ್ಲಿಯೂ ಇದ್ದಾರೆ!)".

ಆದರೆ, ಭಾರತದ ಪಶ್ಚಿಮ ತೀರದಲ್ಲಿ ನೆಲೆಸಿರುವ ಲಕ್ಷಾಂತರ ಅಮಾಯಕ ಜೀವಗಳ ಮಾರಣಹೋಮವನ್ನು ನಾವು ಮರೆತುಬಿಡುತ್ತೇವೆ. ಡಿಯು ಮತ್ತು ಡಮನ್ ಗಳ ಜೊತೆಯಲ್ಲಿ ಗೋವಾ ರಾಜ್ಯ ಅರ್ಧ ಸಹಸ್ರಮಾನದವರೆಗೆ ಪೋರ್ಚುಗೀಸ್ ಕ್ರೂರಿಗಳ ಆಡಳಿತದಲ್ಲಿತ್ತು. ತಮ್ಮ ಆಡಳಿತದ ಅವಧಿಯಲ್ಲಿ ಈ ಕುಬ್ಜಮನಸ್ಸಿನ ಪೋರ್ಚುಗೀಸ್ ಕ್ರೈಸ್ತ ಉಗ್ರಗಾಮಿಗಳು ಮಾನವಕುಲಕ್ಕೆ ಆಗಬಹುದಾದ ಎಲ್ಲ ವಿಧದ ಪೈಶಾಚಿಕ ಕೃತ್ಯಗಳನ್ನು ಎಸಗಿದರು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಕ್ರೈಸ್ತ ಮಿಷನರಿಗಳು ಬೌದ್ಧ/ಜೈನ/ಸಿಖ್/ಹಿಂದೂಗಳನ್ನು ಹಿಂಸೆಪಡಿಸಿದ ವಿವಿಧ ಮಾರ್ಗಗಳು]

ವ್ಯಾಟಿಕನ್ ಘೋಷಿಸಿತು ಎನ್ನುವ ಒಂದೇ ಕಾರಣಕ್ಕೆ ಕೆಲ ಕ್ರೈಸ್ತರು ಫ್ರಾನ್ಸಿಸ್ ಝೇವಿಯರ್ನನ್ನು ಒಬ್ಬ ಸಂತ ಎಂದು ಪೂಜಿಸುತ್ತಾರೆ. ಆದರೆ ಇದೇ ಫ್ರಾನ್ಸಿಸ್ ಝೇವಿಯರ್ ಗೋವಾದಲ್ಲಿ ಶೋಧನೆಯ ಕಟಕಟೆಯನ್ನು ಸ್ಥಾಪಿಸಲು ಅಂದಿನ ಪೋರ್ಚುಗೀಸ್ ರಾಜನಿಗೆ ಪತ್ರಬರೆದು ಅನುಮತಿ ಕೇಳುತ್ತಾನೆ.

ದೈವತ್ವ ಹಾಗಿರಲಿ,  ಈ ಫ್ರಾನ್ಸಿಸ್ ಝೇವಿಯರ್ನಿಗೆ ಕನಿಷ್ಟಪಕ್ಷ ಮನುಶತ್ವ ಇದ್ದಿದ್ದರೂ ತನ್ನ ಕಣ್ಣೆದುರಿಗೆ ಮತ್ತು ತನ್ನಿಂದಾಗಿಯೇ ನರಳುತ್ತಿದ್ದ ಅಮಾಯಕ ಜೀವಗಳ ನೋವನ್ನು ಕೇಳಿಸಿಕೊಳ್ಳುತ್ತಿದ್ದ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಮತಾಂತರಕ್ಕೆ ವಿರೋಧಿಸುವ ಹಿಂದೂ/ಬೌದ್ಧ/ಜೈನ/ಸಿಖ್ ಜನರಿಗೆ ಕ್ರೈಸ್ತ ಮಿಷನರಿಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ನೀಡುತ್ತಿದ್ದ ಹಿಂಸೆ]

ಕೆಲದಿನಗಳ ಹಿಂದೆ ಪ್ರಕೃತಿ ವಿಕೋಪದಿಂದಾಗಿ ಕರ್ನಾಟಕ ಹಾಗು ಕೇರಳದ ಕೆಲ ಭಾಗಗಳು ಒತ್ತಡದಲ್ಲಿದ್ದವು. ಒಬ್ಬರು ಕಷ್ಟದಲ್ಲಿರುವಾಗ ನೀವು ಅವರಿಗೆ ಸಹಾಯ ಮಾಡಬೇಕು; ಅದು ಸಾಧ್ಯವಿಲ್ಲವೆಂದಾದರೆ ಕನಿಷ್ಟಪಕ್ಷ ಅವರ ಒಳಿತಿಗಾಗಿ ಪ್ರಾರ್ಥಿಸಬೇಕು. ಆದರೆ ಕ್ರೈಸ್ತ ಮಿಷನರಿಗಳು ಆ ದುಖಕರ ಸಂಗತಿಯಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವನಿಸುತ್ತಿದ್ದವು. ಈ ಮಿಷನರಿಗಳು ಜನರ ಕಷ್ಟಗಳಲ್ಲಿಯೂ ತಮ್ಮ ಮತಾಂತರದ ವ್ಯಾಪಾರವನ್ನು ಮಾಡುತ್ತವೆ. ಒಂದುವೇಳೆ ಈ ಕ್ರೈಸ್ತ ಮಿಷನರಿಗಳು ಸ್ವಾರ್ಥರಹಿತ ಸಮಾಜಸೇವೆ ಮಾಡುವುದು ನಿಜವೇ ಆಗಿದ್ದರೆ ತಾವು ಮಾಡುವ ಸೇವೆಗೆ ಪ್ರತಿಯಾಗಿ ಏನನ್ನೂ ಬಯಸುತ್ತಿರಲಿಲ್ಲ. ಆದರೆ ತಾವು ಮಾಡುವ ಸಹಾಯಕ್ಕೆ ಬದಲಾಗಿ ನೀವು ಕ್ರೈಸ್ತ ಜಾತಿಗೆ ಮತಾಂತರವಾಗಬೇಕೆಂದು ಈ ಕ್ರೈಸ್ತ ಮಿಷನರಿಗಳು ಬಯಸುತ್ತವೆ. ಇದು ಒಂದು ವ್ಯಾಪಾರವಾಗುತ್ತದೆಯೇ ವಿನಃ ಸೇವೆಯಂತೂ ಅಲ್ಲ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಕೈಕಾಲುಗಳನ್ನು ಕಟ್ಟಿಹಾಕಿ ದೇಹ ತುಂಡಾಗುವವರೆಗೆ ಎರಡೂ ಬದಿಗಳಿಂದ ಎಳೆಯಲಾಗುತ್ತಿತ್ತು]

ಕ್ರೈಸ್ತ ಮಿಷನರಿಗಳು ಮತಾಂತರದ ವ್ಯಾಪಾರವನ್ನು ಎರಡು ವಿಧಗಳಲ್ಲಿ ಮಾಡುತ್ತವೆ:

೧. ನೇರ/ಆಕ್ರಮಣಕಾರಿ ಮತಾಂತರ -

ಈ ವಿಧಾನದಲ್ಲಿ ಕ್ರೈಸ್ತ ಮಿಷನರಿಗಳು ಯಾವುದೇ ರಹಸ್ಯ ಅಥವಾ ಮುಲಾಜಿಲ್ಲದೆ ಬಹಿರಂಗವಾಗಿ ಮತಾಂತರ ಮಾಡುತ್ತವೆ. ಈ ವಿಧದ ಮತಾಂತರ ಮುಖ್ಯವಾಗಿ ಕ್ರೈಸ್ತ ದೇಶಗಳು ಮತ್ತು ಕ್ರೈಸ್ತರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ನಡೆಯುತ್ತದೆ. "ಗೋವಾ ಶೋಧನೆ" ಈ ವಿಧಾನದ ಮತಾಂತರಕ್ಕೆ ಒಂದು ಉದಾಹರಣೆಯಾಗಿದೆ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಪುರುಷರ ಜನನಾಂಗಳ ಮೂಲಕ ನೀಡುತ್ತಿದ್ದ ಹಿಂಸೆ; ಕಾಲಿಗೆ ಹಂದಿ/ಇತರ ಪ್ರಾಣಿಗಳ ಕೊಬ್ಬನ್ನು ಕಟ್ಟಿ ಬೆಂಕಿ ಹಚ್ಚಲಾಗುತ್ತಿತ್ತು]

೨. ಮೃದು/ಪರೋಕ್ಷ ಮತಾಂತರ -

ಕ್ರೈಸ್ತರು ಅಲ್ಪಸಂಖ್ಯಾತರಾಗಿರುವ ಮತ್ತು ಕ್ರೈಸ್ತರ ಆಡಳಿತದಲ್ಲಿರದ ಪ್ರದೇಶಗಳಲ್ಲಿ ಈ ವಿಧದ ಮತಾಂತರವನ್ನು ಮಿಷನರಿಗಳು ಅನುಸರಿಸುತ್ತವೆ. ಈ ವಿಧಾನದಲ್ಲಿ ಕ್ರೈಸ್ತ ಮಿಷನರಿಗಳು ಸಮಾಜಸೇವೆಯ ಹೆಸರಿನಲ್ಲಿ ಶಾಲಾ-ಕಾಲೇಜು, ಮಕ್ಕಳ/ಯುವಕರ ವಸತೀಗೃಹ, ಆಸ್ಪತ್ರೆ, ಅನಾಥಾಶ್ರಮ, ಇತ್ಯಾದಿಗಳನ್ನು ನಡೆಸುತ್ತವೆ ಮತ್ತು ಮನುಷ್ಯನ ಹಣ/ಅಧಿಕಾರ/ಇತರೆ ವ್ಯಾಮೋಹದ ಸ್ವಭಾವವನ್ನು ಬಳಸಿಕೊಂಡು ಮತಾಂತರ ಮಾಡುತ್ತವೆ.
ಈ ವಿಧಾನದಲ್ಲಿ ಕ್ರೈಸ್ತ ಮಿಷನರಿಗಳು ನೇರವಾಗಿ ಮತಾಂತರದ ಬಗ್ಗೆ ಮಾತನಾಡುವುದಿಲ್ಲ, ಬದಲಿಗೆ ಪರೋಕ್ಷವಾಗಿ ಅಮಾಯಕ ಜನರ ತಲೆಕೆಡಿಸಿ ಮತಾಂತರದ ದಾರಿಗೆ ಎಳೆದೊಯ್ಯುತ್ತವೆ. ಹೀಗೆ ಇತರ ಕೋಮುಗಳ ಜನರನ್ನು ವಂಚಿಸಲು/ಆಕರ್ಷಿಸಲು ಕ್ರೈಸ್ತ ಮಿಷನರಿಗಳು "ಕಟ್ಟು ಕತೆಗಳು ಅಥವಾ ಪವಾಡಗಳ ಬಗೆಗಿನ ಸುಳ್ಳು ಕತೆಗಳನ್ನು ಸಮಾಜದಲ್ಲಿ ಹರಡಿಸುತ್ತವೆ ಮತ್ತು ಜನರಿಗೆ ಹಣದ ಆಸೆ ತೋರಿಸಿ ದಾರಿತಪ್ಪಿಸುತ್ತವೆ". ಮತ್ತು ಜನರ ಕಷ್ಟಕಾಲದಲ್ಲಿ ಸಹಾಯ ಮಾಡುವ ನೆಪದಲ್ಲಿ ಮತಾಂತರದ ವ್ಯಾಪಾರ ಮಾಡಲು ಓಡೋಡಿ ಬರುತ್ತವೆ.
ಕರ್ನಾಟಕ ಮತ್ತು ಕೇರಳದ ಪ್ರಕೃತಿ ವಿಕೋಪದ ಘಟನೆ ಈ ವಿಧದ ಮತಾಂತರಕ್ಕೆ ಇತ್ತೀಚಿನ ಉದಾಹರಣೆ. ಮತಾಂತರ ಮಾಡಲು ಹೇಗೆ ಅಷ್ಟೊಂದು ಹಣ ದೊರೆಯುತ್ತದೆ ಎಂದು ತಿಳಿಯಲು ಇಲ್ಲಿ ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು
[ಈ ಎಲ್ಲ ಪೈಶಾಚಿಕ ಕೃತ್ಯಗಳನ್ನು ಮಾಡಿದಮೇಲೆಯೂ ಕ್ರೈಸ್ತ ಮಿಷನರಿಗಳು ತಾವು ಶಾಂತಿಯ ಪ್ರತಿಪಾದಕರೆಂದು ಬೊಳಗೆಬಿಡುತ್ತವೆ]

ಒಂದುವೇಳೆ ನೀವೇನಾದರೂ "ನಾನು ಮಿಷನರಿಗಳ ತಪ್ಪುಗಳಿಗಷ್ಟೇ ಒತ್ತುಕೊಡುತ್ತಿದ್ದೇನೆ" ಅಥವಾ "ಮಿಷನರಿಗಳು ಒಳ್ಳೆಯ ಕೆಲಸವನ್ನೂ ಮಾಡುತ್ತವೆ" ಎಂದು ಯೋಚಿಸುತ್ತಿದ್ದರೆ, ನಾನು ಹೀಗೆ ಇನ್ನೊಂದು ವಿಧದಲ್ಲಿ ನೇರವಾಗಿ ಹೇಳಬಯಸುತ್ತೇನೆ:

ಬಲಾತ್ಕಾರಿಯೊಬ್ಬ ನಿಮ್ಮ ಹತ್ತಿರಕ್ಕೆ ನುಸುಳುತ್ತಿರುವಾಗ ಅವನು "ನಮಸ್ಕಾರ ನನ್ನ ಹೆಸರು ಅಬಕಡ ಮತ್ತು ನಾನಿಲ್ಲಿ ನಿಮಗೆ ಬಲಾತ್ಕಾರ ಮಾಡಲು ಬಂದಿರುತ್ತೇನೆ ಹಾಗಾಗಿ ದಯವಿಟ್ಟು ನನ್ನೊಂದಿಗೆ ಸಹಕರಿಸಿ!" ಎಂದು ಕೇಳುವುದಿಲ್ಲ.
ಮತ್ತು ಒಂದು ಬಲಾತ್ಕಾರ ನಡೆದಾಗ ನಾವು "ಓಹ್ ಆ ಬಲಾತ್ಕಾರಿಗೆ ಒಳ್ಳೆಯ ಹಾಸ್ಯಪ್ರಜ್ಞೆ ಇದೆ" ಎಂದೋ ಅಥವಾ "ಬಡಪಾಯಿ ಬಲಾತ್ಕಾರಿ, ಅವನು ಎಷ್ಟೋ ಜನರಿಗೆ ಸಾಕಷ್ಟು ಹಣವನ್ನು ದಾನಮಾಡಿದ್ದಾನೆ ಹಾಗಾಗಿ ಅವನು ಮಾಡಿದ ಬಲಾತ್ಕಾರವನ್ನು ಮರೆತುಬಿಡೋಣ" ಎಂದೋ ಹೇಳುವುದಿಲ್ಲ.
ನೀವೇ ಸ್ವತಃ ಕುರಿಗಳಂತೆ ಜೀವನ ನಡೆಸಲು ಆಯ್ಕೆಮಾಡಿಕೊಂಡರೆ ದೇವರು ಕೂಡ ನಿಮ್ಮನ್ನು ನರಿಗಳಿಂದ ಉಳಿಸಲು ಸಾಧ್ಯವಿಲ್ಲ.
ಫ್ರಾನ್ಸಿಸ್ ಝೇವಿಯರ್ ಒಬ್ಬ ಕ್ರೈಸ್ತ ಭಯೋತ್ಪಾದಕ.
ಏಕೆಂದರೆ, "ಗೋವಾ ಶೋಧನೆಯು" ೨೬-೧೧ರ ಮುಂಬೈ ಭಯೋತ್ಪಾದಕ ದಾಳಿಗಿಂತ ಭಿನ್ನವಾಗಿರಲಿಲ್ಲ.

ಉಲ್ಲೇಖಗಳು ಮತ್ತು ಹೆಚ್ಚಿನ ಮಾಹಿತಿ (ನಿಮ್ಮ ಮಾನವ ಹೃದಯಕ್ಕೆ ನಮ್ಮ ಪೂರ್ವಜರ ನೋವಿನ ಅರಿವಾಗುತ್ತದೆಯೇ ಎಂದು ಪರೀಕ್ಷಿಸಿ ನೋಡಿ):


1. ಗೋವಾ ಶೋಧನೆ ಭಾಗ ೧: ಪೋಚುಗೀಸರ ಕರಾಳ ಅಧ್ಯಾಯ | ಗೋವಾ ಜನರಮೇಲೆ ಪೋರ್ಚುಗೀಸರ ದೌರ್ಜನ್ಯ:
https://youtu.be/3_CRF_U5uhU

2. ಗೋವಾ ಶೋಧನೆ ಭಾಗ ೨: ಚಿತ್ರಹಿಂಸೆಯ ಗುರುತುಗಳ ಆಚೆ | ಗೋವಾ ಹೇಗೆ ಪೋರ್ಚುಗೀಸ್ ಕ್ರೈಸ್ತರ ಚಿತ್ರಹಿಂಸೆಗಳನ್ನು ಸಹಿಸಿಕೊಂಡಿತು:
https://youtu.be/NPlhsogfmo8

3. ಗೋವಾ ಶೋಧನೆ : ನಾವು ಮರೆಯಲಾಗದ/ಮರೆಯಬಾರದ ಕಹಿ ಸತ್ಯ - ಶೆಫಾಲಿ ವೈದ್ಯರಿಂದ ಚರ್ಚೆ:
https://youtu.be/6nEseljBZ-c

4. [ಪ್ರಶ್ನೋತ್ತರ] ಗೋವಾ ಶೋಧನೆ : ನಾವು ಮರೆಯಲಾಗದ/ಮರೆಯಬಾರದ ಕಹಿ ಸತ್ಯ - ಶೆಫಾಲಿ ವೈದ್ಯರಿಂದ ಚರ್ಚೆ:
https://youtu.be/NBB1ik09sSA

5. ಭಾಗ ೧ - ಗೋವಾ ಸ್ವಾತಂತ್ರ್ಯ ಹೋರಾಟ - ಗೋವಾ ಶೋಧನೆ: https://youtu.be/1RObk8XNMkM

6. ಭಾಗ ೨ - ಗೋವಾ ಸ್ವಾತಂತ್ರ್ಯ ಹೋರಾಟ - ಗೋವಾ ಶೋಧನೆ: https://youtu.be/jLvqzQYnMHo

7. ಭಾಗ ೩ - ಗೋವಾ ಸ್ವಾತಂತ್ರ್ಯ ಹೋರಾಟ - ಗೋವಾ ಶೋಧನೆ: https://youtu.be/CyeMQO96IKI

8. ದಯೆಯಿಲ್ಲದ ಮತ್ತು ಕ್ರೂರ ಗೋವಾ ಶೋಧನೆ: http://www.rediff.com/news/2005/sep/14inter1.htm

9. ಮುಸ್ಲಿಂ ಆಡಳಿತಗಾರರಿಂದ ನಾಶಕ್ಕೊಳಗಾದ ಭಾರತದ ಹಿಂದೂ ದೇವಸ್ಥಾನಗಳು:
https://detechter.com/10-hindu-temples-destroyed-muslim-rulers-india/

10. ಹಿಂದೂಗಳು ಅನುಭವಿಸಿದ/ಅನುಭವಿಸುತ್ತಿರುವ ಕಿರುಕುಳ:
https://en.wikipedia.org/wiki/Persecution_of_Hindus

11. ಇಸ್ಲಾಮಿನಿಂದ ಹಿಂದೂ ದೇವಾಲಯಗಳ ನಾಶ: http://www.stephen-knapp.com/islamic_destruction_of_hindu_temples.htm

12. ಬಂಗಾಳದ ಕ್ಷಾಮ: ಹೇಗೆ ಬ್ರಿಟೀಶರು ಮಾನವ ಇತಿಹಾಸದ ಅತ್ಯಂತ ಕೆಟ್ಟ ನರಮೇಧವನ್ನು ವಿನ್ಯಾಸಗೊಳಿಸಿದರು: https://yourstory.com/2014/08/bengal-famine-genocide/

13. ಕಾಂಗ್ರೆಸ್ ಮುಂದಾಳತ್ವದಲ್ಲಿ ನಡೆದ ೧೯೮೪ರ ಸಿಖ್ ವಿರೋಧಿ ದಂಗೆ: https://en.wikipedia.org/wiki/1984_anti-Sikh_riots

14. ೧೯೮೪ರ ಸಿಖ್ ವಿರೋಧಿ ದಂಗೆಯಲ್ಲಿ ಸರಿಸುಮಾರು ೩,೦೦೦ ಅಮಾಯಕ ಸಿಖ್ಖರನ್ನು ಕೊಲ್ಲಲಾಯಿತು, ಅದರಲ್ಲಿ ಬಹಳಷ್ಟು ಮಾರಣಹೋಮ ದೆಹಲಿಯಲ್ಲಿ ಆಯಿತು:
https://www.tribuneindia.com/news/nation/it-is-high-time-1984-anti-sikh-riot-cases-are-decided-at-earliest-sc/615581.html

15. ೧೯೮೪ರ ಸಿಖ್ ವಿರೋಧಿ ದಂಗೆಯಲ್ಲಿ ನಡೆದಿದ್ದೇನು?:
https://www.quora.com/What-happened-in-1984-anti-Sikh-riots/answer/Harpreet-Singh-24?share=62c0627b&srid=tdmA